Monday 15 April 2019

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ನಾವು ಯಾವುದೇ ಕೆಲಸ ಮಾಡಿದಾಗ ಅದರ ಶ್ರೇಯಸನ್ನು ಇತರರು ನಮಗೆ ಕೊಡಬೇಕೆ ಹೊರತು ನಾವೇ ಅದನ್ನು ತೆಗೆದುಕೊಳ್ಳುವುದಲ್ಲ..... ಮಾಲೆಯನ್ನು ಬೇರೆಯವರು ಹಾಕಿದರೆ ಚೆನ್ನ. ನಮಗೆ ನಾವೇ ಮಾಲೆ ಹಾಕಿಕೊಂಡರೆ ಅದಕ್ಕಿಂತ ಹಾಸ್ಯಾಸ್ಪದ ಸಂಗತಿ ಮತ್ತೊಂದಿಲ್ಲ....😀😀😀😀
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಭಾವನೆಗಳು ಇಂಟರ್ನೆಟ್ನಲ್ಲಿ ಸಿಗುವುದಿಲ್ಲ....
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಶ್ರೀ ರಾಮನಂತ ಆದರ್ಶ ಗುಣಗಳು ನಮ್ಮದಾದರೆ, ಎಂತಹ ಪರಿಸ್ಥಿತಿಯಲ್ಲೂ ಗೆಲುವು ನಮ್ಮದಾಗುತ್ತದೆ....😊😊


 *ಶ್ರೀ ರಾಮ ನ ಕೃಪೆಯಿಂದ ನಮ್ಮೆಲ್ಲರ  ಜೀವನ ಪಾನಕ, ಹೆಸರುಬೇಳೆ ಯಂತೆ ಯಾವಾಗಲೂ ತಂಪಾಗಿರಲಿ*😊😊

*ಎಲ್ಲರಿಗೂ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು*🙏🏻💐😊
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಮಾನವನ ಅವಸಾನಕ್ಕೆ ಮಾನವನ  ಬುದ್ಧಿವಂತಿಕೆಯೇ ಕಾರಣ....😔😊
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಅಷ್ಟದಿಗ್ಗಜವೆ ನೀನ್? ಆದಿಶೇಷನೆ ನೀನು?।
ಕಷ್ಟಭಾರವಿದೆಂದು ನಿಟ್ಟುಸಿರ ಬಿಡುವೆ! ॥
ನಿಷ್ಠುರದ ನಿನ್ನ ಕನಿಕರ ಜಗಕೆ ಬೇಕಿಲ್ಲ।
ಎಷ್ಟಾದರಷ್ಟೆ ಸರಿ  - ಮಂಕುತಿಮ್ಮ ॥


ಬದುಕಿನ ಬವಣೆಯನ್ನು ಪಡುವಾಗ " ಅಯ್ಯೋ ಇದು ಕಷ್ಟ ಮತ್ತು ಇದು ಭಾರ" ಎಂದು ನಿಟ್ಟುಸಿರು ಬಿಡುವೆಯಲ್ಲಾ, ನೀನೇನು ಎಂಟು ದಿಕ್ಕುಗಳನ್ನು ಹೊತ್ತ ಆನೆಗಳಷ್ಟು ಭಾರವನ್ನೂ ಹೊತ್ತಿಲ್ಲ ಅಥವಾ ಆ ಆನೆಗಳನ್ನು ಹೊತ್ತ ಆದಿಶೇಷನಷ್ಟು ಭಾರವನ್ನೂ ಹೊತ್ತಿಲ್ಲವಲ್ಲ. ಸುಮ್ಮನೆ " ನಾನು ಬಹಳ ಕಷ್ಟಪಡುತ್ತಿದ್ದೇನೆ " ಎನ್ನುತ್ತಾ ಅನ್ಯರ ಅನುಕಂಪವನ್ನು ಆಕರ್ಷಿಸುವ ನಿನ್ನನ್ನು ಯಾರೂ ಈ ಜಗತ್ತಿನಲ್ಲಿ ಗಮನಿಸುವುದಿಲ್ಲ. ನಿನಗೆ ಎಷ್ಟು ಹೊರಲಾದರೆ ಅಷ್ಟು ಹೊತ್ತುಕೋ.

-ಡಿ.ವಿ.ಜಿ
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಕರೆ ಕಳುಹಿಸದೆ ಹೋಗುವುದು ಎಷ್ಟು ತಪ್ಪೋ, ಕೇಳದೇ ಇದ್ದರೂ ಬುದ್ದಿ ಹೇಳುವುದು ಅಷ್ಟೇ ತಪ್ಪು..

-ತರಾಸು

Tuesday 9 April 2019

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಮ್ಮತನವಿರಲಿ....

Saturday 6 April 2019

ದಿನಕ್ಕೊಂದು ಸಿ(ಕ)ಹಿ ಮಾತು

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃




ಯುಗ-ಯುಗಾದಿಯ ನಡುವೆ ನಿಜಕ್ಕೂ ಹೊಸತಿದೆ....
ಬಾಳ ಪಯಣದಲ್ಲಿ ಜೊತೆಯಾದವರ ಪ್ರೀತಿ,  ಸ್ನೇಹವಿದೆ....

 *ಕಹಿ* ನೆನಪಿನ ಬೇವು ಮನದಲ್ಲಿ ಮಾಡುತ್ತಿದ್ದರೂ ಘಾಸಿ....
*ಸಿಹಿ* ನೆನಪಿನ ಬೆಲ್ಲ ಮಾಡುತಿರಲಿ ನೋವ ವಾಸಿ....

*ಸಿಹಿ-ಕಹಿ* ಹಂಚಿಕೊಂಡು ಬಾಳುವ ಸಮಚಿತ್ತ ಯುಗಾದಿಗಷ್ಟೇ ಸೀಮಿತವಾಗದಿರಲಿ....
ಬಾಳಿನ *ಏಳು ಬೀಳು* ಗಳನ್ನು ಧೈರ್ಯದಿಂದ ಎದುರಿಸುವ ಸಮಚಿತ್ತ ಸದಾ ಇರಲಿ....😊👍😊


ಎಲ್ಲರಿಗೂ ವಿಕಾರಿನಾಮ ಸಂವತ್ಸರದ  ಯುಗಾದಿ ಹಬ್ಬದ ಶುಭಾಶಯಗಳು...

- ಶಿವಶಂಕರ್. ಎಸ್.ಎಸ್.

Friday 5 April 2019

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃




ಯಶಸ್ಸೆನ್ನುವುದು ಅತ್ಯಂತ ಅಪಾಯಕಾರಿ. ಒಮ್ಮೆ ಯಶಸ್ವಿಯಾದೆವೆಂದರೆ ನಮ್ಮನ್ನು ನಾವೇ ನಕಲು ಮಾಡಲು ಆರಂಭಿಸುತ್ತೇವೆ. ನಮ್ಮನ್ನು ನಾವೇ ನಕಲು ಮಾಡುವುದು ಇತರರನ್ನು ನಕಲು ಮಾಡುವುದಕ್ಕಿಂತ ಹೆಚ್ಚು ಆತಂಕಕಾರೀ ಪ್ರಕ್ರಿಯೆ. ಏಕೆಂದರೆ ಅದು ನಮ್ಮ ಭವಿಷ್ಯದ ಬೆಳವಣಿಗೆಯನ್ನು ಸಂಪೂರ್ಣ ಸ್ಥಗಿತಗೊಳಿಸುತ್ತದೆ.

- ಪಾಬ್ಲೊ ಪಿಕಾಸೊ

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು