🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು ।
ನೆನೆಯದಿನ್ನೊಂದನೆಲ್ಲವ ನೀಡುತದರಾ ॥
ಅನುಸಂಧಿಯಲಿ ಜೀವಭಾರವನು ಮರೆಯುವುದು ।
ಹನುಮಂತನುಪದೇಶ – ಮಂಕುತಿಮ್ಮ ॥
ಹನುಮಂತ ನಮಗೆ ಇಂದಿಗೂ, ಎಂದಿಗೂ ಏಕೆ ಪ್ರಸ್ತುತ ಎಂಬುದನ್ನು ಈ ಪದ್ಯ ಎತ್ತಿಹಿಡಿಯುತ್ತಿದೆ.
ಜೀವನದಲ್ಲಿ ಒಂದು ಮಹಾತತ್ತ್ವದಲ್ಲಿ ಅಚಲವಾಗಿ ಮನಸ್ಸನ್ನು ನಿಲ್ಲಿಸಬೇಕು; ಅದರ ಸಾಕ್ಷಾತ್ಕಾರಕ್ಕೆ ನಿರಂತರ ಪ್ರಯತ್ನಶೀಲರಾಗತಕ್ಕದ್ದು. ಇಂಥ ಕ್ರಿಯಾಶೀಲತೆಯೇ ನಮ್ಮ ಜೀವನದ ನೆಮ್ಮದಿಗೆ ಕಾರಣವಾಗುವಂಥದ್ದು. ಇದೇ ಹನುಮಂತನ ಉಪದೇಶ.
ಎಲ್ಲರಿಗೂ ಹನುಮಜಯಂತಿಯ ಶುಭಾಶಯಗಳು
No comments:
Post a Comment