Sunday 27 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು ।
ನೆನೆಯದಿನ್ನೊಂದನೆಲ್ಲವ ನೀಡುತದರಾ ॥
ಅನುಸಂಧಿಯಲಿ ಜೀವಭಾರವನು ಮರೆಯುವುದು ।
ಹನುಮಂತನುಪದೇಶ – ಮಂಕುತಿಮ್ಮ ॥

ಹನುಮಂತ ನಮಗೆ ಇಂದಿಗೂ, ಎಂದಿಗೂ ಏಕೆ ಪ್ರಸ್ತುತ ಎಂಬುದನ್ನು ಈ ಪದ್ಯ ಎತ್ತಿಹಿಡಿಯುತ್ತಿದೆ.

ಜೀವನದಲ್ಲಿ ಒಂದು ಮಹಾತತ್ತ್ವದಲ್ಲಿ ಅಚಲವಾಗಿ ಮನಸ್ಸನ್ನು ನಿಲ್ಲಿಸಬೇಕು; ಅದರ ಸಾಕ್ಷಾತ್ಕಾರಕ್ಕೆ ನಿರಂತರ ಪ್ರಯತ್ನಶೀಲರಾಗತಕ್ಕದ್ದು. ಇಂಥ ಕ್ರಿಯಾಶೀಲತೆಯೇ ನಮ್ಮ ಜೀವನದ ನೆಮ್ಮದಿಗೆ ಕಾರಣವಾಗುವಂಥದ್ದು. ಇದೇ ಹನುಮಂತನ ಉಪದೇಶ.

ಎಲ್ಲರಿಗೂ ಹನುಮಜಯಂತಿಯ ಶುಭಾಶಯಗಳು

No comments:

Post a Comment

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು